ಮಂಗಳೂರು: ಸಿಎಸ್ ಬಿ ಎಎಸ್ಐ ವೇಣುಗೋಪಾಲ್ ರಾವ್ ಪಿಲಿಕುಂಜೆ ಬಹುಮಾನ್ ಅವರು ಅನಾರೋಗ್ಯದಿಂದ ನಿನ್ನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ವೇಣುಗೋಪಾಲ್ ಅವರು ಮುಲ್ಕಿ, ಪುತ್ತೂರು, ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಇವರು ಪೊಲೀಸ್ ಆಯುಕ್ತರ ಗನ್ ಮ್ಯಾನ್ ಕೂಡಾ ಆಗಿದ್ದರು. ಇತ್ತೀಚೆಗೆ ಮಂಗಳೂರು ಪೊಲೀಸ್ ಆಯುಕ್ತರ ನಗರ ವಿಶೇಷ ಘಟಕದಲ್ಲಿ ಸೇವೆಗೆ ಕೂಡಾ ನಿಯೋಜನೆಗೊಂಡಿದ್ದರು.
ಇವರು ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಪೊಲೀಸ್ ಇಲಾಖೆ ಸಂತಾಪವನ್ನು ಸೂಚಿಸಿದೆ.