Facebook Twitter Instagram
    Monday, May 4
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಸಾಮಾಜಿಕ ಪದ್ಧತಿಗೆ ಕಟ್ಟೆ ಹಾಕಿದ ಕೋರ್ಟ್: ಸೋದರ ಸಂಬಂಧಿ ಮದುವೆ ಶೂನ್ಯ ಎಂದು ಘೋಷಣೆ
    ಇತ್ತೀಚಿನ ಸುದ್ದಿ

    ಸಾಮಾಜಿಕ ಪದ್ಧತಿಗೆ ಕಟ್ಟೆ ಹಾಕಿದ ಕೋರ್ಟ್: ಸೋದರ ಸಂಬಂಧಿ ಮದುವೆ ಶೂನ್ಯ ಎಂದು ಘೋಷಣೆ

    May 4, 2026
    Share

    ರಾಯ್ಪುರ: “ಯಾವುದೇ ಸಾಮಾಜಿಕ ಸಂಪ್ರದಾಯ ಅಥವಾ ಪದ್ಧತಿಗಳು ಕಾನೂನಿಗಿಂತ ಮಿಗಿಲಲ್ಲ,” ಎಂದು ಅಭಿಪ್ರಾಯಪಟ್ಟಿರುವ ಛತ್ತೀಸ್ಗಢ ಹೈಕೋರ್ಟ್, ಸೋದರ ಸಂಬಂಧಿಗಳ (ತಾಯಿಯ ತಂಗಿ ಅಥವಾ ಅಕ್ಕನ ಮಕ್ಕಳು ) ನಡುವಿನ ವಿವಾಹವು ಹಿಂದೂ ವಿವಾಹ ಕಾಯ್ದೆಯಡಿ ಅಸಿಂಧು ಎಂದು ಮಹತ್ವದ ತೀರ್ಪು ನೀಡಿದೆ.
    ಜಾಂಜ್ಗಿರ್-ಚಂಪಾ ಜಿಲ್ಲೆಯ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಹಳೆಯ ಆದೇಶವನ್ನು ರದ್ದುಗೊಳಿಸಿರುವ ಹೈಕೋರ್ಟ್ನ ವಿಭಾಗೀಯ ಪೀಠವು ಈ ಸ್ಪಷ್ಟನೆ ನೀಡಿದೆ.

    ಪ್ರಕರಣದ ಹಿನ್ನೆಲೆ ಏನು?

    2018ರಲ್ಲಿ ಜಾಂಜ್ಗಿರ್-ಚಂಪಾ ಜಿಲ್ಲೆಯ ಯುವಕನೊಬ್ಬ ತನ್ನ ಸೋದರ ಸಂಬಂಧಿಯನ್ನು (ದೊಡ್ಡಮ್ಮನ ಮಗಳು) ವಿವಾಹವಾಗಿದ್ದನು. ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾದ ನಂತರ, ಪತಿಯು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, “ನಮ್ಮಿಬ್ಬರ ತಾಯಂದಿರು ಸೋದರಿಯರಾಗಿದ್ದು, ನಾವು ನಿಷೇಧಿತ ಸಂಬಂಧದ ವ್ಯಾಪ್ತಿಗೆ ಬರುತ್ತೇವೆ. ಆದ್ದರಿಂದ ಈ ವಿವಾಹವನ್ನು ರದ್ದುಗೊಳಿಸಬೇಕು,” ಎಂದು ಕೋರಿದ್ದನು.

    ಕೌಟುಂಬಿಕ ನ್ಯಾಯಾಲಯದ ಹಳೆಯ ತೀರ್ಪು

    ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ಫ್ಯಾಮಿಲಿ ಕೋರ್ಟ್, ಸ್ಥಳೀಯ ಪಟೇಲ್ ಸಮಾಜದ ‘ಬ್ರಹ್ಮ ವಿವಾಹ’ ಪದ್ಧತಿಯಲ್ಲಿ ಇಂತಹ ಮದುವೆಗಳಿಗೆ ಅವಕಾಶವಿದೆ ಎಂಬ ಕಾರಣ ನೀಡಿ ವಿವಾಹವು ಕಾನೂನುಬದ್ಧವಾಗಿದೆ ಎಂದು ತೀರ್ಪು ನೀಡಿತ್ತು. ಹೆಂಡತಿಯ ಪರ ವಕೀಲರು ಕೂಡ ಸಾಮಾಜಿಕ ಸಂಪ್ರದಾಯದಂತೆ ಮದುವೆ ನಡೆದಿರುವುದರಿಂದ ಪತಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.

    ಜಸ್ಟಿಸ್ ಸಂಜಯ್ ಕೆ. ಅಗರ್ವಾಲ್ ಮತ್ತು ಜಸ್ಟಿಸ್ ಸಂಜಯ್ ಜೈಸ್ವಾಲ್ ಅವರಿದ್ದ ಪೀಠವು ಈ ವಾದವನ್ನು ತಳ್ಳಿಹಾಕಿದೆ. ಯಾವುದೇ ಸಾಮಾಜಿಕ ಪದ್ಧತಿಯು ಕಾನೂನಿನ ಮಾನ್ಯತೆ ಪಡೆಯಬೇಕಾದರೆ ಅದು ಅತ್ಯಂತ ಪುರಾತನವಾಗಿರಬೇಕು, ನಿರಂತರವಾಗಿರಬೇಕು ಮತ್ತು ಸಾರ್ವಜನಿಕ ನೀತಿಗೆ ಅನುಗುಣವಾಗಿರಬೇಕು.

    ಹಿಂದೂ ವಿವಾಹ ಕಾಯ್ದೆಯ ಪ್ರಕಾರ, ಸೋದರ ಸಂಬಂಧಿಗಳ ನಡುವಿನ ವಿವಾಹವು ‘ಪ್ರತಿಷೇಧಿತ ಸಂಬಂಧದ’ (Degrees of Prohibited Relationship) ಅಡಿಯಲ್ಲಿ ಬರುತ್ತದೆ. ಇಂತಹ ವಿವಾಹಗಳು ಕಾನೂನಿನ ದೃಷ್ಟಿಯಲ್ಲಿ ಶೂನ್ಯ (Void).ವಿವಾಹವು ಕಾನೂನುಬದ್ಧವಾಗಿ ಅಸಿಂಧುಗೊಂಡರೂ ಸಹ, ಪತ್ನಿಯು ಪತಿಯಿಂದ ಭರಾಣಪೋಷಣೆ (Maintenance) ಪಡೆಯುವ ಹಕ್ಕನ್ನು ಹೊಂದಿರುತ್ತಾಳೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

    ಕೌಟುಂಬಿಕ ಮತ್ತು ಸಾಮಾಜಿಕ ಪದ್ಧತಿಗಳಿಗಿಂತ ದೇಶದ ಕಾನೂನೇ ದೊಡ್ಡದು ಎಂಬುದನ್ನು ಈ ತೀರ್ಪು ಸಾಬೀತುಪಡಿಸಿದೆ. ಇನ್ನು ಮುಂದೆ ಇಂತಹ ವಿವಾದಾತ್ಮಕ ವಿವಾಹ ಪ್ರಕರಣಗಳಿಗೆ ಈ ತೀರ್ಪು ಒಂದು ಪ್ರಮುಖ ನಿದರ್ಶನವಾಗಲಿದೆ

    Post Views: 1

    PoliceInvestigation

    Related Posts

    ಪೊಲೀಸರಿಗೆ ಬೆದರಿಕೆ: ಕರ್ತವ್ಯಕ್ಕೆ ಅಡ್ಡಿಪಡಿಸಿದ ಮಹಿಳೆ ವಿರುದ್ಧ ದೂರು

    May 4, 2026

    ತಾಯಿಯೇ ಮಗು ಮಾರಾಟ ಮಾಡಿದ ಆರೋಪ: ಬೆಂಗಳೂರಿನಲ್ಲಿ ಗಂಭೀರ ಪ್ರಕರಣ

    May 4, 2026

    ಕೌಟುಂಬಿಕ ಕಲಹ ದುರಂತಕ್ಕೆ: ನಾಲ್ವರು ಮಕ್ಕಳು ಸೇರಿ ಐವರ ಹತ್ಯೆ

    May 4, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.