ಮೂಡುಬಿದಿರೆ: ಒಮಾನ್ ನಲ್ಲಿ ಜು.27ರ ಸೋಮವಾರ ಸಂಭವಿಸಿದ ವಾಹನ ಅಪಘಾತದಲ್ಲಿ ಸಾಣೂರು ಮೂಲಗುತ್ತು ಮನೆಯ ರಾಜವರ್ಮ ಜೈನ್ (33) ಮೃತಪಟ್ಟಿದ್ದಾರೆ.
ರಾಜವರ್ಮ ಅವರು ಅಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು ಕಂಪೆನಿಯ ವಾಹನವನ್ನು ಇನ್ನೊಬ್ಬ ಸಿಬಂದಿ ರಿವರ್ಸ್ ತೆಗೆಯುವಾಗ ವಾಹನದಡಿಗೆ ಬಿದ್ದು ಸಾವನ್ನಪ್ಪಿರುವುದಾಗಿ ಹೇಳಲಾಗಿದೆ.
ರಾಜವರ್ಮ ಅವರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.




