Facebook Twitter Instagram
    Saturday, July 25
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಪೋಷಕರೇ ಎಚ್ಚರ: ಮಕ್ಕಳಿಗೆ ಬೈಕ್‌ ಕೊಡುವ ಮುನ್ನ ಈ ಸುದ್ದಿ ಮಿಸ್‌ ಮಾಡದೇ ಓದಿ
    ಇತ್ತೀಚಿನ ಸುದ್ದಿ

    ಪೋಷಕರೇ ಎಚ್ಚರ: ಮಕ್ಕಳಿಗೆ ಬೈಕ್‌ ಕೊಡುವ ಮುನ್ನ ಈ ಸುದ್ದಿ ಮಿಸ್‌ ಮಾಡದೇ ಓದಿ

    February 13, 2023
    Share

    ಚಾಮರಾಜನಗರ: ಅಪ್ರಾಪ್ತೆ ವಾಹನ ಚಾಲನೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ಚಾಮರಾಜನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದ ಮೆಟ್ಟಿಲೇರಿ ಈಗ ಲೋಕಾ ಅದಾಲತ್ ಅಲ್ಲಿ 12.500 ರೂ ಇತ್ಯರ್ಥವಾಗಿದೆ ಎಂದು ತಿಳಿದುಬಂದಿದೆ.

    ಪಟ್ಟಣದಲ್ಲಿ ದಿನೆ ದಿನೆ ಅಪ್ರಾಪ್ತರಿಂದ ವಾಹನ ಚಾಲನೆ, ಶಿರಸ್ತ್ರಾಣ ಧರಿಸದೆ ವಾಹನ ಸಂಚಾರ ಮಾಡುವ ಪ್ರಕರಣಗಳು ಕೂಡ ಹೆಚ್ಚುತ್ತಿದೆ ಎಂದು ಸವಿಸ್ತೃತವಾಗಿ ನಿಮ್ಮ ಕನ್ನಡ ನ್ಯೂಸ್‌ ನೌ ವರದಿ ಪ್ರಕಟಿಸಲಾಗಿತ್ತು.

    ಕೆಲವು ಅಪ್ರಾಪ್ತರು ವಾಹನ ಚಾಲನೆ ಮಾಡುತ್ತಿರುವ ಸಂಬಂದ ಕೆಲ ಪೊಲೀಸರು ಗೊತ್ತಿದ್ದು ಗೊತ್ತಿಲ್ಲದಂತೆ ಮೌನವಾಗಿದ್ದರು..ಕೆಲ ಪೊಲೀಸರೂ ಕೂಡ ತಮ್ಮ ಮಕ್ಕಳು ಅಪ್ರಾಪ್ತರೆಂದು ಗೊತ್ತಿದ್ದರೂ , ವಾಹನ ಚಾಲನೆ ಮಾಡೊದು ತಪ್ಪೆಂದು ಗೊತ್ತಿದ್ದರೂ ಕಾನೂನಿನ ಅರಿವಿನ ಬಗ್ಗೆ ಬೇಜವಬ್ದಾರಿತನ ಪ್ರದರ್ಶನ ಮಾಡಿದ್ದಾರೆ..ಮಾಡುತ್ತಿದ್ದಾರ ಬಗ್ಗೆ ಸುದ್ದಿ ಹಾಕಲಾಗಿತ್ತು.

    ಚಾಮರಾಜನಗರ ಪಟ್ಟಣದಲ್ಲಿ ಶಾಲಾ ಮಕ್ಕಳಿಂದ ವಾಹನ ಚಾಲನೆಯನ್ನ ಚಾಲನೆ ಮಾಡಿಸೊದು ತಪ್ಪು ಎಂದು ತಿಳಿದಿದ್ದರೂ ಪೋಷಕರು ಮಾತ್ರ ಉದ್ದಟತನ ಪ್ರದರ್ಶಿಸಿದ್ದಾರೆ. ಜಿಲ್ಲೇಲಿ ಇಷ್ಟು ಅಪ್ರಾಪ್ತ ಮಕ್ಕಳಿಂದ ವಾಹನ ಚಾಲನೆ ಮಾಡುತ್ತಿದ್ದರೂ ಯಾವ್ದೆ ಪ್ರಕರಣ ನ್ಯಾಯಾಲಯಕ್ಕೆ ಹಸ್ತಾಂತರಿಸದೆ ರಾಜೀ ಮಾಡಿಕೊಂಡು ಕೈ ಬಿಡುತ್ತಿರುವುದೆ ಸಾಕ್ಷಿಯಾಗಿದೆ. ಅನ್ಯ ಜಿಲ್ಲೆಯೊಂದರಲ್ಲಿ ನ್ಯಾಯಾಲಯ ಅಪ್ರಾಪ್ತ ಮಕ್ಕಳ ವಾಹನ ಚಾಲನೆ ಮಾಡಿದ ತಪ್ಪಿದೆ 25 ಸಾವಿರ ದಂಡ ಹಾಕಿದ ಸುದ್ದಿ ಪ್ರಚಲಿತವಾಗಿದೆ. ಹೀಗಿರುವಾಗ ಜಿಲ್ಲೇಲಿ ಇಂತಹ ಪ್ರಕರಣ ಪೊಲೀಸರು ಕಣ್ಣಿಗೆ ಕಂಡರೂ ಮೌನವಹಿಸಿದೆ. ಕಠಿಣ ಕ್ರಮ ಜರುಗಿಸದೆ ಇರೋದು ಇಂತಹ ಸನ್ನಿವೇಶಗಳಿಗೆ ಕಾರಣವಾಗಿದೆ‌ ಎಂದು ವರದಿ ಮಾಡಲಾಗಿತ್ತು.

    ಇತ್ತೀಚೆಗೆ ಕೆಎಸ್ಪಿ ಆಯಪ್ ಅಲ್ಲಿ ಅಪ್ರಾಪ್ತೆ ಬಾಲಕಿ ಶಿರಸ್ತ್ರಾಣ ಧರಿಸದೆ, ತ್ರಿಬಲ್ ರೈಡ್ ಜೊತೆಗೆ ಅಪಾಯಕಾರಿ ವಾಹನ ಚಾಲನೆ ಮಾಡುತ್ತಿದ್ದ ಪ್ರಕರಣ ದಾಖಲಿಸಿದ್ದರು. ಇದರಿಂದ ಎಚ್ಚೆತ್ತ ಸಂಚಾರಿ ಠಾಣಾ ಪೊಲೀಸರು ವಾಹನ ಚಾಲನೆ ಮಾಡುತ್ತಿದ್ದ ವಿದ್ಯಾರ್ಥಿನಿ ಹಾಗೂ ಪೋಷಕರ ಮೇಲೆ FIR ದಾಖಲಿಸಿದ್ದರು.

    ಚಾಮರಾಜನಗರ ಸಂಚಾರಿ ಠಾಣೆಯ ಇನ್ಸ್ ಪೆಕ್ಟರ್ ನಂದೀಶ್ ಅವರು ಎಪ್‌ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಈ ಪ್ರಕರಣ ಬಹುಶಃ ವ್ಯಾಜ್ಯ ಪೂರ್ವ ಪ್ರಕರಣದಡಿ ಲೋಕಾ ಅದಾಲತ್ ಅಲ್ಲಿ 12.500 ರೂ ಕಟ್ಟಿಸಿಕೊಂಡು ಇತ್ಯರ್ಥ ಮಾಡಲಾಗಿದೆ. ಅಪ್ರಾಪ್ತ ವಾಹನ ಚಾಲನಾ ಸಂಬಂದ ಬಹುತೇಕ ಜಿಲ್ಲೆಗಳಲ್ಲಿ 25 ಸಾವಿರ ಹಾಗೂ ಅದ್ಕಿಂತ ಹೆಚ್ಚು ದಂಡ ನ್ಯಾಯಾಲಯ ವಿಧಿಸಿದ್ದವು. ಹೈಕೋರ್ಟ್ ನ್ಯಾಯಾದೀಶರ ಆದೇಶದಂತೆ ಶೆ.೫೦ % ರಿಯಾಯ್ತಿ ದರದಲ್ಲಿ ದಂಡ ಪಾವತಿ ಮಾಡಿಕೊಂಡಿರುವುದು ನೋಡಿದರೆ ಅಲ್ಲಿಗೆ 25 ಸಾವಿರ ದಂಡ ಬಿದ್ದಂತಾಗಿದೆ ಎಂದರೆ ತಪ್ಪಾಗಲಾರದು. ಚಾಮರಾಜನಗರ ಜಿಲ್ಲೆಯಲ್ಲಿ ಹಾಗೂ ಸಂಚಾರಿ ಠಾಣೆಯಲ್ಲಿ ಎಪ್‌ಐಆರ್ ದಾಖಲಿಸಿ ನ್ಯಾಯಾಲಯ ಹಂತದವರೆಗಿನ ಪ್ರಕರಣ ದಾಖಲಿಸಿ ದಂಡ ವಿಧಿಸಿದ ಮೊದಲ ಪ್ರಕರಣ ಇದಾಗಿದೆ ಎಂದರೆ ತಪ್ಪಾಗಲಾರದು.

    Post Views: 223

    Related Posts

    ನಕಲಿ ಪಿಎಚ್‌ಡಿ ಹಗರಣ ಬಯಲು: 249 ಅತಿಥಿ ಉಪನ್ಯಾಸಕರಿಗೆ ವಜಾ, FIR ಆದೇಶ

    July 25, 2026

     ಜಂತರ್ ಮಂತರ್ ನಲ್ಲಿ 2500ಕ್ಕೂ ಹೆಚ್ಚು ಅಪರಾಧ ಹಿನ್ನೆಲೆ ಉಳ್ಳವರು ಪತ್ತೆ!!

    July 25, 2026

    ಖೋಟಾ ನೋಟು ಚಲಾಯಿಸಲು ಯತ್ನ : ಇಬ್ಬರು ಅರೆಸ್ಟ್!

    July 25, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ನಕಲಿ ಪಿಎಚ್‌ಡಿ ಹಗರಣ ಬಯಲು: 249 ಅತಿಥಿ ಉಪನ್ಯಾಸಕರಿಗೆ ವಜಾ, FIR ಆದೇಶ

    July 25, 2026

     ಜಂತರ್ ಮಂತರ್ ನಲ್ಲಿ 2500ಕ್ಕೂ ಹೆಚ್ಚು ಅಪರಾಧ ಹಿನ್ನೆಲೆ ಉಳ್ಳವರು ಪತ್ತೆ!!

    July 25, 2026

    ಖೋಟಾ ನೋಟು ಚಲಾಯಿಸಲು ಯತ್ನ : ಇಬ್ಬರು ಅರೆಸ್ಟ್!

    July 25, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.