ಉಳ್ಳಾಲ; ಉಳ್ಳಾಲದಲ್ಲಿ ಯಾವುದೇ ತಲವಾರು ದಾಳಿ ಯತ್ನ ನಡೆದಿಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಯಾರೂ ವದಂತಿ ಹಬ್ಬಿಸಬೇಡಿ, ವದಂತಿ ಮಾಡಿದವನ ವಿಚಾರಣೆ ನಡೆದಿದೆ. ಆತನ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ವ್ಯಕ್ತಿಯೋರ್ವ ತನ್ನನ್ನು ಬೆನ್ನು ಹಟ್ಟಿ ತಲವಾರು ದಾಳಿ ನಡೆಸಲು ಯತ್ನಿಸಿದ್ದಾನೆ ಎಂಬ ವದಂತಿ ಹಬ್ಬಿಸಿದ್ದ. ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ವದಂತಿ ನಡೆದಿದೆ. ಉಚ್ಚಿಲ ನಿವಾಸಿ ಕಿಶೋರ್ ಎಂಬಾತ ಈ ರೀತಿ ವದಂತಿ ಹಬ್ಬಿಸಿದಾತ. ಈತ ಇಂದು ಬೆಳಗ್ಗೆ ಕೆ.ಸಿ.ನಗರ ಮುಳ್ಳುಗುಡ್ಡೆ ಎಂಬಲ್ಲಿ ತನ್ನನ್ನು ಯಾರೋ ಬೆನ್ನಟ್ಟಿ ತಲವಾರು ದಾಳಿಗೆ ಯತ್ನಿಸಿದ್ದಾರೆ ಎಂದು ವದಂತಿ ಹಬ್ಬಿಸಿದ್ದ.ಈ ಬಗ್ಗೆ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಕುದ್ದು ವಿಚಾರಣೆ ನಡೆಸಿದ್ದು, ಇದೀಗ ಘಟನೆ ಸುಳ್ಳು ಎಂದು ಹೇಳಿದ್ದಾರೆ.