ಮುಲ್ಕಿ: ಇತಿಹಾಸ ಪ್ರಸಿದ್ದ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅತ್ಯಂತ ವಿಜೃಂಭಣೆಯಿಂದ ವರ್ಷಾವಧಿ ಜಾತ್ರಾ ಮಹೋತ್ಸವ ನಡೆಯಿತು. ಇದರ ಅಂಗವಾಗಿ ನೆರವೇರಿದ್ದ ಬ್ರಹ್ಮರಥೋತ್ಸವದ ಸಂದರ್ಭ ದೇವರ ರಥ ಮುರಿದು ಬಿದ್ದಿರುವ ಘಟನೆ ನಡೆದಿದೆ.

ಶನಿವಾರ ಬೆಳಗ್ಗಿನ ಜಾವ ಸುಮಾರು 1.40ರ ವೇಳೆಗೆ ಭಕ್ತರ ಸಮ್ಮುಖದಲ್ಲಿ ಬ್ರಹ್ಮರಥೋತ್ಸವ ಎಳೆಯುವ ವೇಳೆ ರಥದ ಚಕ್ರ ಹಾಗೂ ಮೇಲ್ಬಾಗ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಅರ್ಚಕರು ಹಾಗೂ ರಥವನ್ನು ಎಳೆಯುತ್ತಿದ್ದ ಭಕ್ತರು ಪವಾಡಸದೃಷವಾಗಿ ಬಚಾವಾಗಿದ್ದಾರೆ.
ಘಟನೆಯ ಬಳಿಕ ದೇವರ ಉತ್ಸವ ಮೂರ್ತಿಯನ್ನು ಚಂದ್ರ ಮಂಡಲ ರಥದಲ್ಲಿ ಇರಿಸಿ
ದೇವರ ಉತ್ಸವ ಮುಂದುವರಿಸಲಾಯಿತು. ಯಾವುದೇ ರೀತಿಯ ಪ್ರಾಣಾಪಾಯ, ಹಾನಿ ಸಂಭವಿಸಿಲ್ಲ.