Facebook Twitter Instagram
    Tuesday, June 3
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಕೆಲಸಕ್ಕೆಂದು ಪಾಕಿಸ್ತಾನಕ್ಕೆ ಹೋದ ಭಾರತೀಯ ‘ಶತ್ರು’ ಅಲ್ಲ: ಕೇರಳ ಹೈಕೋರ್ಟ್ ಮಹತ್ವದ ತೀರ್ಪು
    ಇತ್ತೀಚಿನ ಸುದ್ದಿ

    ಕೆಲಸಕ್ಕೆಂದು ಪಾಕಿಸ್ತಾನಕ್ಕೆ ಹೋದ ಭಾರತೀಯ ‘ಶತ್ರು’ ಅಲ್ಲ: ಕೇರಳ ಹೈಕೋರ್ಟ್ ಮಹತ್ವದ ತೀರ್ಪು

    June 26, 2024
    Share

    ಕೊಚ್ಚಿ: ಭಾರತ ರಕ್ಷಣಾ ಕಾಯಿದೆ 1971ರ ನಿಯಮ 130 ಮತ್ತು 138ರ ಅಡಿಯಲ್ಲಿ ಒಬ್ಬ ವ್ಯಕ್ತಿಯು ಕೆಲಸ ಹುಡುಕಿಕೊಂಡು ಪಾಕಿಸ್ತಾನಕ್ಕೆ ಹೋಗಿರುವುದರಿಂದ ಶತ್ರುವಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಶತ್ರುವಿನ ಜತೆ ವ್ಯವಹಾರ ಮಾಡದ ಹೊರತು ಈ ಕಾಯ್ದೆಯಡಿ ಶತ್ರುವಾಗುವುದಿಲ್ಲ ಎಂದೂ ಕೋರ್ಟ್ ಅಭಿಪ್ರಾಯಪಟ್ಟಿದೆ.

    ಅರ್ಜಿದಾರರಾದ ಪಿ. ಉಮರ್ ಕೋಯಾ ಅವರು ತಮ್ಮ ತಂದೆ ಕುಂಜಿಕೋಯ ತಮ್ಮ ಸಂಬಂಧಿಕರಿಂದ ಕೆಲವು ಜಮೀನು ಮತ್ತು ಆಸ್ತಿಯನ್ನು ಖರೀದಿಸಿದ ಪ್ರಕರಣದಲ್ಲಿ ನ್ಯಾಯಾಲಯದ ಈ ತೀರ್ಪು ಬಂದಿದೆ. ಅಲ್ಲದೆ ನ್ಯಾಯಾಲಯವು ಕರಾಚಿಯ ಹೋಟೆಲ್‌ನಲ್ಲಿ ಕೆಲಕಾಲ ಕೆಲಸ ಮಾಡಿದ್ದ ಅರ್ಜಿದಾರರ ತಂದೆ ಕುಂಜಿ ಕೋಯಾ ಅವರ ಆಸ್ತಿಗಳ ವಿರುದ್ಧ ಶತ್ರು ಆಸ್ತಿ ಕಾಯ್ದೆಯಡಿಯಲ್ಲಿ ಆರಂಭಿಸಲಾದ ವಿಚಾರಣೆಯನ್ನು ರದ್ದುಗೊಳಿಸಿದೆ.

    ಈ ಪ್ರಕರಣವು ಉಮರ್ ಕೋಯಾ ಎಂಬ ವ್ಯಕ್ತಿಯದ್ದಾಗಿದೆ. ಮಲಪ್ಪುರಂ ನಿವಾಸಿ ಉಮರ್ ಕೋಯಾ ತಮ್ಮ ತಂದೆಯ ಆಸ್ತಿಯನ್ನು ಶತ್ರು ಆಸ್ತಿ ಕಾಯ್ದೆ 1968ರ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಾಸ್ತವವಾಗಿ, ಒಮರ್ ಕೋಯಾ ಅವರ ತಂದೆ ಕುಂಜಿ ಕೋಯಾ ಅವರು 1953ರಲ್ಲಿ ಕೆಲಸ ಹುಡುಕಿಕೊಂಡು ಪಾಕಿಸ್ತಾನದ ಕರಾಚಿಗೆ ಹೋಗಿದ್ದರು. ಅಲ್ಲಿ ಕೆಲಕಾಲ ಹೊಟೇಲ್‌ನಲ್ಲಿ ಸಹಾಯಕರಾಗಿ ಕೆಲಸ ಮಾಡಿದರು. ನಂತರ ಅವರು ಭಾರತಕ್ಕೆ ಮರಳಿದರು. ಇನ್ನು 1995ರಲ್ಲಿ ಮಲಪ್ಪುರಂನಲ್ಲಿ ಮೃತಪಟ್ಟಿದ್ದರು.

    ಕೊಚ್ಚಿ: ಭಾರತ ರಕ್ಷಣಾ ಕಾಯಿದೆ 1971ರ ನಿಯಮ 130 ಮತ್ತು 138ರ ಅಡಿಯಲ್ಲಿ ಒಬ್ಬ ವ್ಯಕ್ತಿಯು ಕೆಲಸ ಹುಡುಕಿಕೊಂಡು ಪಾಕಿಸ್ತಾನಕ್ಕೆ ಹೋಗಿರುವುದರಿಂದ ಶತ್ರುವಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಶತ್ರುವಿನ ಜತೆ ವ್ಯವಹಾರ ಮಾಡದ ಹೊರತು ಈ ಕಾಯ್ದೆಯಡಿ ಶತ್ರುವಾಗುವುದಿಲ್ಲ ಎಂದೂ ಕೋರ್ಟ್ ಅಭಿಪ್ರಾಯಪಟ್ಟಿದೆ.

    ಅರ್ಜಿದಾರರಾದ ಪಿ. ಉಮರ್ ಕೋಯಾ ಅವರು ತಮ್ಮ ತಂದೆ ಕುಂಜಿಕೋಯ ತಮ್ಮ ಸಂಬಂಧಿಕರಿಂದ ಕೆಲವು ಜಮೀನು ಮತ್ತು ಆಸ್ತಿಯನ್ನು ಖರೀದಿಸಿದ ಪ್ರಕರಣದಲ್ಲಿ ನ್ಯಾಯಾಲಯದ ಈ ತೀರ್ಪು ಬಂದಿದೆ. ಅಲ್ಲದೆ ನ್ಯಾಯಾಲಯವು ಕರಾಚಿಯ ಹೋಟೆಲ್‌ನಲ್ಲಿ ಕೆಲಕಾಲ ಕೆಲಸ ಮಾಡಿದ್ದ ಅರ್ಜಿದಾರರ ತಂದೆ ಕುಂಜಿ ಕೋಯಾ ಅವರ ಆಸ್ತಿಗಳ ವಿರುದ್ಧ ಶತ್ರು ಆಸ್ತಿ ಕಾಯ್ದೆಯಡಿಯಲ್ಲಿ ಆರಂಭಿಸಲಾದ ವಿಚಾರಣೆಯನ್ನು ರದ್ದುಗೊಳಿಸಿದೆ.

    ಈ ಪ್ರಕರಣವು ಉಮರ್ ಕೋಯಾ ಎಂಬ ವ್ಯಕ್ತಿಯದ್ದಾಗಿದೆ. ಮಲಪ್ಪುರಂ ನಿವಾಸಿ ಉಮರ್ ಕೋಯಾ ತಮ್ಮ ತಂದೆಯ ಆಸ್ತಿಯನ್ನು ಶತ್ರು ಆಸ್ತಿ ಕಾಯ್ದೆ 1968ರ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಾಸ್ತವವಾಗಿ, ಒಮರ್ ಕೋಯಾ ಅವರ ತಂದೆ ಕುಂಜಿ ಕೋಯಾ ಅವರು 1953ರಲ್ಲಿ ಕೆಲಸ ಹುಡುಕಿಕೊಂಡು ಪಾಕಿಸ್ತಾನದ ಕರಾಚಿಗೆ ಹೋಗಿದ್ದರು. ಅಲ್ಲಿ ಕೆಲಕಾಲ ಹೊಟೇಲ್‌ನಲ್ಲಿ ಸಹಾಯಕರಾಗಿ ಕೆಲಸ ಮಾಡಿದರು. ನಂತರ ಅವರು ಭಾರತಕ್ಕೆ ಮರಳಿದರು. ಇನ್ನು 1995ರಲ್ಲಿ ಮಲಪ್ಪುರಂನಲ್ಲಿ ಮೃತಪಟ್ಟಿದ್ದರು.

    Post Views: 215

    Related Posts

    ಮಟ್ಕಾ ದಂಧೆಯ ವಿರುದ್ಧ ಬೃಹತ್ ಕಾರ್ಯಾಚರಣೆ: 12 ಮಂದಿ ವಶಕ್ಕೆ

    June 3, 2025

    ದಕ್ಷಿಣ ಕನ್ನಡದ 36 ಮಂದಿ ರೌಡಿಶೀಟರ್ ಗಳ ಗಡಿಪಾರು ಕಾನೂನು ಪ್ರಕ್ರಿಯೆ ಆರಂಭ

    June 3, 2025

    ಮಂಗಳೂರು: ಪೊಲೀಸರ ಕಾರ್ಯಾಚರಣೆಗೆ ಅಡ್ಡಿಪಡಿಸಿದರೆ ಕಠಿಣ ಕ್ರಮ- ಎಸ್ಪಿ ಡಾ.ಅರುಣ್ ಎಚ್ಚರಿಕೆ

    June 2, 2025
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2025 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.