ಮೈಸೂರು: ನಗರದಲ್ಲಿ ಯುವತಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಖೆಡ್ಡಾ ತೋಡಿ, ಹಣ ದೋಚುತ್ತಿದ್ದಂತ ಪೊಲೀಸ್ ಕಾನ್ಸ್ ಸ್ಟೇಬಲ್ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಠಾಣೆಯ ಕಾನ್ಸ್ ಸ್ಟೇಬಲ್ ಶಿವಣ್ಣ, ಮೂರ್ತಿ ಸೇರಿದಂತೆ ಐವರು ಆರೋಪಿಗಳು ಹನಿಟ್ರ್ಯಾಪ್ ಖೆಡ್ಡಾವನ್ನು ಬಟ್ಟೆ ಅಂಗಡಿಯ ಮಾಲೀಕ ದಿನೇಶ್ ಎಂಬುವರಿಗೆ ತೋಡಿದ್ದರು.
ದಿನೇಶ್ ಕುಮಾರ್ ಅಂಗಡಿಗೆ ಬಟ್ಟೆ ಖರೀದಿಗೆ ತೆರಳಿದ್ದಂತ ಯುವತಿ, ಆತನನ್ನ ಪರಿಚಯಿಸಿಕೊಂಡು ಪೋನ್ ನಂಬರ್ ಪಡೆದು ವಾಟ್ಸ್ ಆಪ್ ಮೂಲಕ ಚಾಟ್ ಗೆ ಇಳಿದು, ಮನೆಯಲ್ಲಿ ಯಾರು ಇಲ್ಲ. ಕಾಪಿಗೆ ಬನ್ನಿ ಎಂಬುದಾಗಿ ದಿನೇಶ್ ಕುಮಾರ್ ಆಹ್ವಾನಿಸಿದ್ದರು. ಯುವತಿ ಮಾತಿಗೆ ಮರುಳಾಗಿ ತೆರಳಿದ್ದಂತ ವೇಳೆಯಲ್ಲಿ ಕಾನ್ಸ್ ಸ್ಟೇಬಲ್ ಶಿವಣ್ಣ, ಮೂರ್ತಿ ದಿಢೀರ್ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ದಿನೇಶ್ ಕುಮಾರ್ ಥಳಿಸಿ ವೀಡಿಯೋ ಮಾಡಿದ್ದರು.
ಈ ಘಟನೆಯ ನಂತ್ರ ದಿನೇಶ್ ಕುಮಾರ್ ಗೆ ಬ್ಲಾಕ್ ಮೇಲ್ ಮಾಡಿ, ಈ ವಿಷಯ ಯಾರಿಗೂ ಹೇಳದಿರಲು 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮಾನ ಮರ್ಯಾದೆಗೆ ಅಂಜಿದ್ದಂತ ದಿನೇಶ್ ಕುಮಾರ್ ಸಹೋದರನಿಂದ 10 ಲಕ್ಷ ಹಣ ತರಲು ತಿಳಿಸಿದ್ದನು. ಹೀಗೆ ಇದ್ದಕ್ಕಿದ್ದಂತೆ ದಿನೇಶ್ ಹೇಳಲು ಕಾರಣವೇನೆಂದು ಅನುಮಾನಗೊಂಡಂತ ಸಹೋದರ ಬೆಟ್ಟದಪುರ ಪೊಲೀಸರಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಹನಿಟ್ರ್ಯಾಪ್ ಖೆಡ್ಡಾ ತೋಡಿದ್ದಂತ ಕಾನ್ಸ್ ಸ್ಟೇಬಲ್ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.