ಪುಂಜಾಲಕಟ್ಟೆ: ಮಡಂತ್ಯಾರು ನಾವುಂಡ ರಸ್ತೆ ಬದಿಯಿರುವ ಅಡಿಕೆ ವ್ಯಾಪಾರಿಯೋರ್ವರ ಅಂಗಡಿಯಿಂದ ಕೆಲಸಗಾರನ ಗಮನ ಬೇರೆಡೆ ಸೆಳೆದು ಪೆಟ್ಟಿಗೆಯಲ್ಲಿದ್ದ 2.31 ಲಕ್ಷ ರೂ. ನಗದು ಕಳವು ಮಾಡಿದ ಘಟನೆ ನಡೆದಿದೆ.
![](https://policepatrikekarnataka.com/wp-content/uploads/2024/06/WhatsApp-Image-2024-06-03-at-2.00.46-PM.jpeg)
![](https://policepatrikekarnataka.com/wp-content/uploads/2024/04/rohan-corp1.jpeg)
![](https://policepatrikekarnataka.com/wp-content/uploads/2024/04/rohan-corp2.jpeg)
![](https://policepatrikekarnataka.com/wp-content/uploads/2024/04/rohan-corp3.jpeg)
![](https://policepatrikekarnataka.com/wp-content/uploads/2024/04/rohan-corp4.jpeg)
ಜ. 1ರಂದು ಬೆಳಗ್ಗೆ ಅಂಗಡಿಯಲ್ಲಿ ಕೆಲಸ ಮಾಡುವ ಇಸ್ಮಾಯಿಲ್ ಅವರಲ್ಲಿ ಕ್ಯಾಶ್ ಡ್ರಾವರ್ನ ಕೀ ನೀಡಿ ಮಾಲಕರು ಅನ್ಯ ಕೆಲಸದ ನಿಮಿತ್ತ ತೆರಳಿದ್ದರು.
ಮಧ್ಯಾಹ್ನ ಅಂಗಡಿ ಮಾಲಕ ಪುಷ್ಪರಾಜ್ ಅವರಿಗೆ ಕೆಲಸಗಾರ ಇಸ್ಮಾಯಿಲ್ ಕರೆ ಮಾಡಿ, ಅಂಗಡಿಗೆ ಮಧ್ಯಾಹ್ನ ಅಪರಿಚಿತರಿಬ್ಬರು ಸ್ಕೂಟರಿನಲ್ಲಿ ಬಂದಿದ್ದು, ಅಂಗಡಿಯಲ್ಲಿದ್ದವರ ಗಮನ ಬೇರೆಡೆಗೆ ಸೆಳೆದು ಪೆಟ್ಟಿಗೆಯಲ್ಲಿÉದ್ದ ಹಣವನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ.
ತತ್ಕ್ಷಣ ಪುಷ್ಪರಾಜ್ ಅಂಗಡಿಗೆ ಬಂದು ಪರಿಶೀಲಿಸಿ ಒಟ್ಟು 2,31,000 ರೂ. ಹಣ ಕಳವಾಗಿರುವ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.