ಕಾಸರಗೋಡು: ನ್ಯಾಯಾಧೀಶ ಎಂಬಂತೆ ನಟಿಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲೆತ್ನಿಸಿದ ಹಲವು ಪ್ರಕರಣಗಳ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ತಿರುವನಂತಪುರ ತೇನ್ನಲ ನಿವಾಸಿ ಶಮ್ನಾದ್ (42) ಬಂಧಿತ ಆರೋಪಿಯಾಗಿದ್ದಾನೆ.ನೀಲೇಶ್ವರ ಪೊಲೀಸ್ ಠಾಣೆಗೆ ಜ. 8ರಂದು ಕರೆ ಮಾಡಿ ಪತ್ತನಂತಿಟ್ಟದ ನ್ಯಾಯಾಧೀಶರ ಕಾರು ದಾರಿಯಲ್ಲಿ ಕೈಕೊಟ್ಟು ರಸ್ತೆಯಲ್ಲೇ ಉಳಿದುಕೊಂಡಿದ್ದಾರೆ. ರಾತ್ರಿ ಉಳಿದುಕೊಳ್ಳಲು ಅವರಿಗೆ ಅಗತ್ಯದ ವಸತಿ ಸೌಕರ್ಯ ಏರ್ಪಡಿಸು ವಂತೆ ಫೋನಿನಲ್ಲಿ ತಿಳಿಸಿದರು.ಪೊಲೀಸರು ಅಲ್ಲಿಗೆ ಹೋಗಿ ವಿಚಾರಿಸಿದಾಗ ಅವರ ವರ್ತನೆಯಲ್ಲಿ ಶಂಕೆಗೊಂಡು ಗುರುತುಪತ್ರ ಕೇಳಿದಾಗ ನಿರಾಕರಿಸಿದ. ಆ ಬಳಿಕ ತೀವ್ರ ವಿಚಾರಣೆ ನಡೆಸಿದಾಗ ಆತ ಹಲವು ಪ್ರಕರಣಗಳ ಆರೋಪಿಯೆಂದು ತಿಳಿದು ಆತನನ್ನು ಬಂಧಿಸಲಾಯಿತು.
![](https://policepatrikekarnataka.com/wp-content/uploads/2024/06/WhatsApp-Image-2024-06-03-at-2.00.46-PM.jpeg)
![](https://policepatrikekarnataka.com/wp-content/uploads/2024/04/rohan-corp1.jpeg)
![](https://policepatrikekarnataka.com/wp-content/uploads/2024/04/rohan-corp2.jpeg)
![](https://policepatrikekarnataka.com/wp-content/uploads/2024/04/rohan-corp3.jpeg)
![](https://policepatrikekarnataka.com/wp-content/uploads/2024/04/rohan-corp4.jpeg)