Facebook Twitter Instagram
    Monday, September 14
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ತೋಕೂರು ನಿಲ್ದಾಣದಲ್ಲಿ ಕಾಮಗಾರಿ: 3 ದಿನ ರೈಲು ಸಂಚಾರ ವ್ಯತ್ಯಯ
    ಇತ್ತೀಚಿನ ಸುದ್ದಿ

    ಮಂಗಳೂರು: ತೋಕೂರು ನಿಲ್ದಾಣದಲ್ಲಿ ಕಾಮಗಾರಿ: 3 ದಿನ ರೈಲು ಸಂಚಾರ ವ್ಯತ್ಯಯ

    October 18, 2023
    Share

    ಮಂಗಳೂರು: ಕೊಂಕಣ ರೈಲು ಮಾರ್ಗದಲ್ಲಿ ಮಂಗಳೂರು ಸಮೀಪದ ತೋಕೂರು ನಿಲ್ದಾಣದ ಪಾಯಿಂಟ್ ನಂ.122ರಲ್ಲಿ ಅ.18ರಿಂದ 20ರವರೆಗೆ ಬದಲಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಈ ಮೂರು ದಿನಗಳಂದು ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟನೆ ತಿಳಿಸಿದೆ. ಅ.18ರ ಬೆಳಗ್ಗೆ 7:15ರಿಂದ 9:45ರವರೆಗೆ ವಿವಿಧ ಕಾಮಗಾರಿ ನಡೆಯಲಿದ್ದು, ಈ ವೇಳೆ ಅ.17ರಂದು ಮುಂಬೈಯಿಂದ ಹೊರಟ ರೈಲು ನಂ.12619 ಲೋಕಮಾನ್ಯ ತಿಲಕ ಮುಂಬೈ ಹಾಗೂ ಮಂಗಳೂರು ಸೆಂಟ್ರಲ್‌ ನಡುವಿನ ಮತ್ಸ್ಯಗಂಧ ಎಕ್ಸ್‌ ಪ್ರೆಸ್‌ನ್ನು 30 ನಿಮಿಷಗಳ ಕಾಲ ಸುರತ್ಕಲ್ ನಿಲ್ದಾಣದಲ್ಲಿ ತಡೆ ಹಿಡಿಯಲಾಗುವುದು. ಅ.19ರ ಮುಂಜಾನೆ 6:40ರಿಂದ 9:10ರವರೆಗೆ ವಿವಿಧ ಕಾಮಗಾರಿ ನಡೆಯಲಿದ್ದು, ಈ ವೇಳೆ ಅ.17ರಂದು ಹೊರಟ ರೈಲು ನಂ.16311 ಗಾಂಧಿ ನಗರ ಹಾಗೂ ಕೊಚ್ಚುವೇಲಿ ಎಕ್ಸ್‌ಪ್ರೆಸ್‌ನ್ನು 30 ನಿಮಿಷ ಸುರತ್ಕಲ್ ನಿಲ್ದಾಣದಲ್ಲಿ ತಡೆ ಹಿಡಿಯಲಾಗುವುದು. ಅ.20ರ ಬೆಳಗ್ಗೆ 6:40ರಿಂದ 9:40ರವರೆಗೆ ಕಾಮಗಾರಿ ಹಾಗೂ ಪರೀಕ್ಷೆಗಳು ನಡೆಯಲಿದ್ದು, ಈ ವೇಳೆ ಅ.19ರಂದು ಮುಂಬೈಯಿಂದ ಹೊರಟ ರೈಲು ನಂ.12619 ಲೋಕಮಾನ್ಯ ತಿಲಕ್- ಮಂಗಳೂರು, ಸೆಂಟ್ರಲ್‌ ಮತ್ಸ್ಯಗಂಧ ಎಕ್ಸ್‌ ಪ್ರೆಸ್‌ನ್ನು 30 ನಿಮಿಷಗಳ ಕಾಲ ಕುಮಟಾ ಹಾಗೂ ಉಡುಪಿ ನಡುವೆ ತಡೆ ಹಿಡಿಯಲಾಗುವುದು. ಅದೇ ದಿನ ಮುಂಜಾನೆ ಮಡಗಾಂವ್‌ ನಿಂದ ಹೊರಡುವ ರೈಲು ನಂ. 10107 ಮಡಗಾಂವ್, ಜಂಕ್ಷನ್‌ – ಮಂಗಳೂರು ಸೆಂಟ್ರಲ್ ಮೆಮು ಎಕ್ಸ್ ಪ್ರೆಸ್ ಸುರತ್ಕಲ್ ನಿಲ್ದಾಣದಲ್ಲಿ ಪ್ರಯಾಣವನ್ನು ಕೊನೆಗೊಳಿಸಲಿದೆ. ಹೀಗಾಗಿ ಸುರತ್ಕಲ್ ಮಂಗಳೂರು ಸೆಂಟ್ರಲ್‌ ನಡುವಿನ ಸಂಚಾರ ರದ್ದಾಗಲಿದೆ. ಅದೇ ದಿನ ಮಂಗಳೂರು ಸೆಂಟ್ರಲ್‌ ನಿಂದ ತೆರಳ ಬೇಕಿದ್ದ ರೈಲು ನಂ.10108 ಮಂಗಳೂರು ಸೆಂಟ್ರಲ್ ಹಾಗೂ ಮಡಗಾಂವ್‌ ಜಂಕ್ಷನ್ ಮೆಮು ಎಕ್ಸ್ ಪ್ರೆಸ್ ತನ್ನ ಪ್ರಯಾಣವನ್ನು ನಿಗದಿತ ಸಂಜೆ 4:34ಕ್ಕೆ ಸುರತ್ಕಲ್ ನಿಲ್ದಾಣದಿಂದ ಪ್ರಾರಂಭಿಸಲಿದೆ. ಹೀಗಾಗಿ ಮಂಗಳೂರು ಸೆಂಟ್ರಲ್- ಸುರತ್ಕಲ್ ನಡುವಿನ ಸಂಚಾರ ರದ್ದಾಗಲಿದೆ. ಅಲ್ಲದೇ ಅ.18ರಂದು ತನ್ನ ಪ್ರಯಾಣ ಆರಂಭಿಸುವ ರೈಲು ನಂ. 22475 ಹಿಸ್ಸಾರ್ – ಕೊಯಮತ್ತೂರು ಎಕ್ಸ್ ಪ್ರೆಸ್‌ನ ಅ.20ರ ಸಂಚಾರವನ್ನು ಕುಂದಾಪುರ ಹಾಗೂ ಸುರತ್ಕಲ್ ನಿಲ್ದಾಣಗಳ ನಡುವೆ 45 ನಿಮಿಷಗಳ ಕಾಲ ತಡೆ ಹಿಡಿಯಲಾಗುತ್ತದೆ ಎಂದು ಕೊಂಕಣ ರೈಲ್ವೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ.

    Post Views: 214

    Related Posts

    ಉಜಿರೆ ಮನೋಜ್ ಕುಂಜುರ್ಪ ಗಡಿಪಾರು ಆದೇಶ ಅರ್ಜಿ ವಜಾ

    September 14, 2026

    ಕಾರ್ಕಳ: ಶಾಸಕ ಸುನಿಲ್ ಕುಮಾರ್ ವಿರುದ್ಧ ಪ್ರಚೋದನಕಾರಿ ವಿಡಿಯೋ- ಆರೋಪಿ ಪ್ರಸಾದ್ ಶೆಟ್ಟಿ ಅರೆಸ್ಟ್

    September 14, 2026

    ಸೆ.18ಕ್ಕೆ ತೆರೆಕಾಣಲಿದೆ ‘ಟಾಸ್’: ತುಳು-ಕನ್ನಡದಲ್ಲಿ ಸಿದ್ಧವಾದ ಅರ್ಜುನ್ ದೇವ್ ನಿರ್ದೇಶನದ ಸಿನಿಮಾ

    September 14, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಉಜಿರೆ ಮನೋಜ್ ಕುಂಜುರ್ಪ ಗಡಿಪಾರು ಆದೇಶ ಅರ್ಜಿ ವಜಾ

    September 14, 2026

    ಕಾರ್ಕಳ: ಶಾಸಕ ಸುನಿಲ್ ಕುಮಾರ್ ವಿರುದ್ಧ ಪ್ರಚೋದನಕಾರಿ ವಿಡಿಯೋ- ಆರೋಪಿ ಪ್ರಸಾದ್ ಶೆಟ್ಟಿ ಅರೆಸ್ಟ್

    September 14, 2026

    ಸೆ.18ಕ್ಕೆ ತೆರೆಕಾಣಲಿದೆ ‘ಟಾಸ್’: ತುಳು-ಕನ್ನಡದಲ್ಲಿ ಸಿದ್ಧವಾದ ಅರ್ಜುನ್ ದೇವ್ ನಿರ್ದೇಶನದ ಸಿನಿಮಾ

    September 14, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.