ಸುಳ್ಯ: ಕಂಪ್ಯೂಟರ್ ತರಗತಿ ಮುಗಿಸಿ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಹಿಂಬಾಲಿಸಿಕೊಂಡು ಬಂದ ಯುವಕನೊಬ್ಬ ಯುವಕ ಕಿರುಕುಳ ನೀಡಿರುವ ಬಗ್ಗೆ ದೂರು ದಾಖಲಾಗಿದೆ.
![](https://policepatrikekarnataka.com/wp-content/uploads/2024/06/WhatsApp-Image-2024-06-03-at-2.00.46-PM.jpeg)
![](https://policepatrikekarnataka.com/wp-content/uploads/2024/04/rohan-corp1.jpeg)
![](https://policepatrikekarnataka.com/wp-content/uploads/2024/04/rohan-corp2.jpeg)
![](https://policepatrikekarnataka.com/wp-content/uploads/2024/04/rohan-corp3.jpeg)
![](https://policepatrikekarnataka.com/wp-content/uploads/2024/04/rohan-corp4.jpeg)
ಸುಳ್ಯದ ಕಲ್ಲುಮುಟ್ಲುವಿನ ಯುವತಿ ಪೇಟೆಯಿಂದ ಗಾಂಧಿನಗರದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಅಪರಿಚಿತ ಯುವಕ ಹಿಂಬಾಲಿಸಿದ್ದಲ್ಲದೆ ಪ್ರೀತಿಸುವುದಾಗಿ ಹೇಳಿದ್ದ.ಯುವತಿಯು ಈ ವಿಚಾರವನ್ನು ಪೇಟೆಯಲ್ಲಿಯೇ ಇದ್ದ ತನ್ನ ತಂದೆಗೆ ತಿಳಿಸಿದಳು. ಅವರು ಬಂದ ಕೂಡಲೇ ಯುವಕ ಹೊಟೇಲೊಂದಕ್ಕೆ ನುಗ್ಗಿ ಹಿಂಬಾಗಿಲಿನ ಮೂಲಕ ತಪ್ಪಿಸಿಕೊಂಡನೆನ್ನಲಾಗಿದೆ. ಸುಳ್ಯ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.